Land Records:ನಿಮ್ಮ ಜಮೀನಿಗೆ ಸಂಬಂಧಪಟ್ಟ ಟಿಪ್ಪಣಿ ಎಂದರೆ ಏನು? ಮುಖ್ಯವಾಗಿ ಆಕಾರ ಬಂದ ಆಕಾರಬಂದ ನಿಮ್ಮ ಜಮೀನಿಗೆ ಯಾವ ರೀತಿ ಸಂಬಂಧ ಇರುತ್ತೆ? ಜೊತೆಗೆ ಇನ್ನೊಂದು ಮುಖ್ಯವಾದದ್ದು.ಪಹಣಿ ಅಂದ್ರೆ RTC ಬಗ್ಗೆ ನಿಮಗೆಷ್ಟು ಗೊತ್ತು?
Land Records
ಮೊದಲಿಗೆ ಜಮೀನು ಸರ್ವೆಯಲ್ಲಿ ಹೆಚ್ಚಾಗಿ ಉಪಯೋಗಿಸುವುದು ಟಿಪ್ಪಣಿಅದಾದ ನಂತರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭೂ ಮಾಪನ ಮಾಡಿರುವುದನ್ನು ಹಿಸ್ಸಾ ಸರ್ವೆ ನಂದು ಆಯಿತು..ಟಿಪ್ಪಣಿ ಎಂದರೇನು? ಎರಡು ಟಿಪ್ಪಣಿಗಳಿವೆ. ಮೈಸೂರು ಸಂಸ್ಥಾನ ಮತ್ತು ನಿಜಾಮರ ಸಂಸ್ಥಾನದಲ್ಲಿ ಭೂ ಮಾಪಕರು ಅಂದರೆ ಭೂಮಿಯಲ್ಲಿ ಅವರು ಭೂಮಿ ಅಳತೆ ಮಾಡಿರುವುದನ್ನು ಮೂಲ ಸರ್ವೆಂದು ಕರೆಯುತ್ತೇವೆ.
ಜಮೀನು ಮೂಲಸರ್ವೇ ಸಮಯದಲ್ಲಿ ಟಿಪ್ಪಣಿ ರಚಿಸುವುದಕ್ಕೆ ಆಗಲಾರದ ಸಂದರ್ಭದಲ್ಲಿ ಈ ಕಾಲದಲ್ಲಿ ಟಿಪ್ಪಣಿ ರಚಿಸುತ್ತಾರೆ.ರಚಿಸಿದ ಪ್ರತಿಯೊಂದು ಜಮೀನಿನ ನಕ್ಷೆ ಟಿಪ್ಪಣಿ ಎಂದು ಹೇಳುತ್ತೇವೆ.ಎಲ್ಲ ಜಮೀನಿನ ಟಿಪ್ಪಣಿಗಳು ನಿಮ್ಮ ತಾಲೂಕಿನ ತಹಶೀಲ್ದಾರ ಕಚೇರಿಯ ಭೂ ಮಾಪನ ಶಾಖೆಯಲ್ಲಿ.₹10 ಬಿಲ್ ಕಟ್ಟಿ ಸಲ್ಲಿಸಿದ ನಂತರ ಏಳು ದಿನದೊಳಗಾಗಿ ದೃಢೀಕೃತ ಪ್ರತಿಯನ್ನು ಕೊಡುತ್ತಾರೆ.ಕೆಲವೊಂದು ಜಮೀನಿಗೆ ಟಿಪ್ಪಣಿ ಇರೋದಿಲ್ಲ ಅಂತವರು ಏನು ಮಾಡಬೇಕು? ಮೊದಲು ಯಾವುದಾದರೂ ಒಂದು ಸರ್ವೆಲೆನ್ಸ್ ನಲ್ಲಿ ಅಂದ್ರೆ 11 ಈ ಅಥವಾ ಟಿಟಿ ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಬೇಕು.
ಜಮೀನಿನ ಆಕಾರಬಂದ್ ಎಂದರೇನು ?
ಯಾವುದೇ ಒಂದು ಜಮೀನಿನ ಅಂತಿಮ ವಿಸ್ತೀರ್ಣ ಇರುವ ದಾಖಲೆ ಪತ್ರವನ್ನು ಆಕಾರಬಂದ್ ಎಂದು ಕರೆಯುತ್ತೇವೆ.ಆಕಾರಬಂದ ದಾಖಲೆ ಚಿತ್ರ ನೋಡಿರಬಹುದು. ನೀವು ಆಕಾರ ಬಂದ್ನಲ್ಲಿ ಒಟ್ಟು 29 ಕಲಾಂ ಇರುತ್ತವೆ. ಮೊದಲನೇ ಕಾಲಂನಲ್ಲಿ ಸರ್ವೆ ನಂಬರ್ ಇರುತ್ತೆ.ಎರಡನೇ ಕಾಲಂನಲ್ಲಿ ಕೂಡ ಸರ್ವೆ ನಂಬರ್ ಇರುತ್ತೆ. ಹಾಗೆ ಮೂರನೇ ಕಾಲಂನಲ್ಲಿ ಹಿಸ್ಸಾ ನಂಬರ್ ಇರುತ್ತೆ. ನಾಲ್ಕು ನೇ ಕಾಲಂನಲ್ಲಿ ಜಮೀನಿನ ಒಟ್ಟು ವಿಸ್ತೀರ್ಣ ಕೊಟ್ಟಿರುತ್ತಾರೆ._1ಹಾಗೆ ಐದರಲ್ಲಿ ಖರಾಬಿನ ಬಗ್ಗೆ ತಿಳಿಸಿರುತ್ತಾರೆ.
ಜಮೀನಿಗೆ ಪಹಣಿ ಅಂದ್ರೆ ಆರ್ ಟಿಸಿ ಫೈನಲ್ ದಾಖಲೆಯಲ್ಲ. ಯಾವುದೇ ಕಾರಣಕ್ಕೂ ಹೊಲಕ್ಕೆ ಪಹಣಿ ಫೈನಲ್ ದಾಖಲೆಯಲ್ಲ. ಅಂತಿಮ ದಾಖಲೆಯಲ್ಲ.ಆಕಾರಬಂದ್ ಜಮೀನಿಗೆ ಫೈಲ್ ಡಾಕ್ಯುಮೆಂಟ್ ಆಗಿರುತ್ತೆ ನೆನಪಿರಲಿ.ಆದ್ದರಿಂದ ಆಕಾರ್ಬಂದ್ ಫೈಲ್ ಡಾಕ್ಯುಮೆಂಟ್ ಆಗಿರೋದ್ರಿಂದ ಪಹಣಿ ಆಕಾರ್ ಬಂದ್ ಇದ್ದಂತೆ ತಿದ್ದುಪಡಿ ಮಾಡಬಹುದು ಅಂದ್ರೆ ಆಕಾರ್ಬಂದ್ ಯಾವ ರೀತಿ ಇರುತ್ತದೋ ಅದೇ ರೀತಿ ನೀವು ಪಹಣಿ ತಿದ್ದುಪಡಿ ಮಾಡುವುದಕ್ಕೆ ಅವಕಾಶವಿದೆ.
ಆಕಾರಬಂಧು ಕೂಡ ತಿದ್ದುಪಡಿ ಮಾಡಬಹುದು. ಯಾವಾಗವೆಂದರೆ ಜಮೀನು ಪಹಣಿಯಲ್ಲಿ ಜಾಸ್ತಿ ಇರುತ್ತೆ. ಆದ್ರೆ ಸ್ಥಳದಲ್ಲಿ ಜಮೀನುಷ್ಟು ಇರುವುದಿಲ್ಲ.ಜಮೀನು ಅನುಭವ ಪ್ರಕಾರ ತಿದ್ದುಪಡಿ ಮಾಡಿ ಆಕಾರ್ಬಂದ್ ಸಹ ತಿದ್ದುಪಡಿ ಮಾಡಬಹುದು.
ಪಹಣಿ ಬಗ್ಗೆ ನೋಡೋಣ.
ಪಹಣಿ ಎಂದರೇನು? ಜಮೀನು ಯಾರ ಹೆಸರಿನಲ್ಲಿದೆ ಎಂದು ತಿಳಿಸುವ ದಾಖಲೆ ಪತ್ರವೇ ಪಾಣಿ ಎಂದು ಕರೆಯುತ್ತೇವೆ. ನೆನಪಿರಲಿ ಜಮೀನು ಯಾರ ಹೆಸರಿನಲ್ಲಿದೆ.ಅದನ್ನು ತಿಳಿಸುವ ದಾಖಲೆಪತ್ರ ಪಾಣಿ ಎಂದು ಕರೆಯುತ್ತೇವೆ ಮತ್ತು ಜಮೀನಿನಲ್ಲಿ ಯಾವ ಬೆಳೆ ಬೆಳೆದಿದೆ? ಆ ಒಂದು ವರ್ಷದಲ್ಲಿ ಒಂದು ಸಹನೆ ತಿಳಿಸಿಕೊಡುತ್ತೆ ಮತ್ತು ಜಮೀನು ವರ್ಗಾವಣೆ ಹೇಗೆ ಆಯಿತು? ಕ್ರಯ ಮೂಲಕ ನ ಅಥವಾ ದಾನದ ಮೂಲಕ ನ ಅಥವಾ ವಿಭಾಗ ಮೂಲಕ ಎನ್ನುವುದರ ಬಗ್ಗೆ ಪಹಣಿ ತಿಳಿಸುತ್ತೆ.ಮತ್ತು ಪಹಣಿದಾರರು ಯಾವ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದರೆ ಅದನ್ನು ಸಹ ದಾಖಲೆ ಇರುತ್ತೆ.
Read More
FCI Recruitment 2024 :ಭಾರತೀಯ ಆಹಾರ ನಿಗಮದಲ್ಲಿವೆ 5000 ಪೋಸ್ಟ್ ಗಳು !ಎಸ್ ಸ್ ಎಲ್ಸಿ ಆದವರು ಅರ್ಜಿ ಸಲ್ಲಿಸಿ
Bank Sakhi Yojane:ಗ್ರಾಮೀಣ ಮಹಿಳೆಯರು ತಿಂಗಳಿಗೆ ಗಳಿಸಿ ₹40,000 ಹಣ ,ಸರ್ಕಾರದಿಂದ ಬಿಗ್ ನ್ಯೂಸ್
Krishi Honda Scheme :2023-24ನೇ ಸಾಲಿನ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಅಹ್ವಾನ