krishi honda scheme :ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ವತಿಯಿಂದ 2023 24 ನೇ ಸಾಲಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮುಖಾಂತರ ಶೇಕಡಾ 50 ರಷ್ಟು ಸಬ್ಸಿಡಿಯೊಂದಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಆಸಕ್ತಿ ಇರುವಂತಹ ರೈತರಿಂದ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.ಈ ಸೌಲಭ್ಯವನ್ನ ಕೃಷಿ ಭಾಗ್ಯ ಯೋಜನೆಯಲ್ಲಿ ರೈತರು ಸದುಪಯೋಗ ಪಡೆಯಬಹುದು. ಈ ಸೌಲಭ್ಯವನ್ನ ಪಡೆಯಲಿಕ್ಕೆ ನೀಡಬೇಕಾಗಿರುವ ದಾಖಲೆಗಳು ಎನು ಬೇಕು? ಹಾಗೆ ಕೊನೆ ದಿನಾಂಕ ಯಾವುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ಕೃಷಿ ಹೊಂಡದಿಂದ ಆಗುವ ಪ್ರಯೋಜನಗಳು
ಮೊದಲನೆಯದಾಗಿ ರೈತರಿಗೆ ಕೃಷಿ ಹೊಂಡದಿಂದ ಆಗುವ ಪ್ರಯೋಜನಗಳು ಯಾವು ಅಂತದೆ ಕೃಷಿ ಹೊಂಡ ನಿರ್ಮಾಣದಿಂದ ಕೃಷಿಗೆ ಅಗತ್ಯವಾದ ಪ್ರಮಾಣದ ನೀರು ಸಂಗ್ರಹಿಸುವ ಜೊತೆಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತೆ ಮತ್ತು ಒಣ ಭೂಮಿ ರೈತರಿಗೆ ಬೆಳೆ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ಕೊರತೆ ನೀಗಿಸಿ ಉತ್ತಮ ಬೆಳೆ ಕಾಪಾಡಿ ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಇದು ಸಹಕಾರಿಯಾಗಿರುತ್ತೆ.ಹಾಗೆ 21 ಮೀಟರ್ ಉದ್ದ, 21 ಮೀಟರ್ ಅಗಲ ಮತ್ತು ಮೂರು ಮೀಟರ್ ಆಳದ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡರೆ ತಮ್ಮ ಜಮೀನಿನಲ್ಲಿ ಕೆಂಪು ಮಣ್ಣನ್ನು ಹೊಂದಿರುವಂತಹ ರೈತರಿಗೆ 52,000 ರೂ ಗಳ ಮತ್ತು ತಮ್ಮ ಜಮೀನಿನಲ್ಲಿ ಕಪ್ಪು ಮಣ್ಣನ್ನು ಹೊಂದಿರುವಂತಹ ರೈತರಿಗೆ 45,000 ರೂ ಗಳ ಸಬ್ಸಿಡಿಯನ್ನ ಇಲಾಖೆಯಿಂದ ನೀಡಲಾಗುತ್ತೆ.
krishi honda scheme ಬೇಕಾಗುವ ಧಾಖಲೆಗಳು
ಈ ಸೌಲಭ್ಯಕ್ಕೆ ಅದಕ್ಕೆ ನಿಮಗೆ ಬೇಕಾಗಿರುವ ಅಗತ್ಯಗಳು ಯಾವ್ಯಾವ ಅಂದ್ರೆ ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು, ಅರ್ಜಿದಾರರು ಸ್ವಂತ ಜಮೀನನ್ನು ಹೊಂದಿರಬೇಕಾಗಿರುತ್ತದೆ,ರೇಷನ್ ಕಾರ್ಡ್,ಪಾಸ್ಪೋರ್ಟ್ ಫೋಟೋ ,ಜಾತಿ ಪ್ರಮಾಣ ಪತ್ರ.ಆದಾಯ ಪ್ರಮಾಣ ಪತ್ರ,ಬ್ಯಾಂಕ್ ಪಾಸ್ಪುಸ್ತಕ ಬೇಕಾಗುತ್ತೆ.ರೈತರ ಜಮೀನಿನ ಪಹಣಿಬೇಕಾಗುತ್ತೆ.ಕೊನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕಾಗಲಿದೆ.
krishi honda scheme ಗೆ ಅರ್ಜಿ ಹಾಕುವುದು ಹೇಗೆ ?
ಈ ಕೃಷಿ ಹೊಂಡ ನಿರ್ಮಾಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಬೇಕು ಅಂದ್ರೆ ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳ್ಕೋಬೇಕಾಗುತ್ತೆ.ರೈತರು ಕೃಷಿ ಹೊಂಡ ನಿರ್ಮಾಣ ಸೌಲಭ್ಯಕ್ಕೆ ಅರ್ಜಿ ಹಾಕಬೇಕು ಅಂತ ಇದ್ದೀವಿ ಅಂತವರನ್ನು ತಿಳಿಸಿರುವ ಎಲ್ಲ ದಾಖಲೆಗಳನ್ನ ತಗೊಂಡು ನೀವು ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಇದಕ್ಕೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ನಿಗದಿ ಮಾಡಿರುವುದಿಲ್ಲ,